Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಮೆರವಣಿಗೆಗೆ ಮಳೆ ಸಿಂಚನ: ನಂದಿ ಧ್ವಜಕ್ಕೆ ಸಿ.ಎಂ. ಪೂಜೆ

$
0
0
ಮೆರವಣಿಗೆಗೆ ಮಳೆ ಸಿಂಚನ: ನಂದಿ ಧ್ವಜಕ್ಕೆ ಸಿ.ಎಂ. ಪೂಜೆ

ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ, ಐತಿಹಾಸಿಕ ಮೈಸೂರು ದಸರಾ ಮೆರವಣಿಗೆಗೆ ಚಾಲನೆ ದೊರೆತಿದೆ.

ಅರಮನೆಯ ಬಲರಾಮ ದ್ವಾರದಲ್ಲಿ ಸಿದ್ಧರಾಮಯ್ಯ, ಪುಷ್ಪಾರ್ಚನೆ ಮಾಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಯದುವೀರ ಕೃಷ್ಣರಾಜ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಮಳೆಯಾಗಿದೆ. ಮೆರವಣಿಗೆ ಆರಂಭಕ್ಕೂ ಮೊದಲು ಮಳೆಯ ಸಿಂಚನವಾಗಿದ್ದು, ಜನ ಕೊಡೆ, ಚೇರ್ ಗಳನ್ನು ಹಿಡಿದುಕೊಂಡರು.

ಅರ್ಜುನ ಆನೆಯ ಮೇಲಿನ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅಪಾರ ಸಂಖ್ಯೆಯ ಜನ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದಾರಿಯುದ್ದಕ್ಕೂ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>