Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಕ್ಷಣಾರ್ಧದಲ್ಲಿ ಕರಗಿತು ಮೊದಲ ರಾತ್ರಿ ಸಂಭ್ರಮ

$
0
0
ಕ್ಷಣಾರ್ಧದಲ್ಲಿ ಕರಗಿತು ಮೊದಲ ರಾತ್ರಿ ಸಂಭ್ರಮ

ಬಳ್ಳಾರಿ: ಮದುವೆ ಎಂದರೆ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ನವ ದಂಪತಿಗೆ ಮದುವೆ, ಮೊದಲ ರಾತ್ರಿಯ ಕುರಿತಂತೆ ಏನೇನೋ ಆಸೆ, ಕನಸುಗಳಿರುತ್ತವೆ.

ಆದರೆ, ಮೊದಲ ರಾತ್ರಿಯಲ್ಲೇ ನವವಧು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಬೆಳಗಲ್ ಕ್ರಾಸ್ ನ ಯುವತಿಗೆ ಸೆಪ್ಟಂಬರ್ 14 ರಂದು ಮದುವೆಯಾಗಿದ್ದು, 16 ರಂದು ಆರತಕ್ಷತೆ ಹಾಗೂ ಮೊದಲ ರಾತ್ರಿ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಮೊದಲ ರಾತ್ರಿಗೆ ಸಿದ್ಧತೆ ನಡೆದಿದ್ದು, ಈ ಸಂದರ್ಭದಲ್ಲಿ ನವವಧು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಕೂಡಲೇ ಆಕೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ತೀವ್ರ ಸುಟ್ಟಗಾಯಗಳಾಗಿದ್ದ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>