Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಡಿ.ವೈ.ಎಸ್.ಪಿ. ಗಣಪತಿಯವರ ಪತ್ನಿ ಹೇಳಿದ್ದೇನು..?

$
0
0
ಡಿ.ವೈ.ಎಸ್.ಪಿ. ಗಣಪತಿಯವರ ಪತ್ನಿ ಹೇಳಿದ್ದೇನು..?

ಮಡಿಕೇರಿ: ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ವತಿಯಿಂದ ಮಡಿಕೇರಿಯ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ.

ಈ ಪ್ರಕರಣದಲ್ಲಿ ಗಣಪತಿ ಅವರು ಮಾಡಿದ್ದ ಆರೋಪಗಳಿಗೆ ಸಾಕ್ಷ್ಯಾಧಾರಗಳು ಇಲ್ಲದ ಕಾರಣ, ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ. ಆರೋಪಿತರಾಗಿದ್ದ ಮಾಜಿ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಎ.ಎಂ. ಪ್ರಸಾದ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಈ ಕುರಿತಂತೆ ಗಣಪತಿ ಅವರ ಪತ್ನಿ ಪಾವನಾ ಪ್ರತಿಕ್ರಿಯೆ ನೀಡಿದ್ದಾರೆ.

ಪತಿಯ ಸಾವಿನ ಬಗ್ಗೆ ಸಿ.ಐ.ಡಿ. ‘ಬಿ’ ರಿಪೋರ್ಟ್ ಸಲ್ಲಿಸಿದ್ದು, ತಮಗೆ ನ್ಯಾಯ ದೊರೆಯುವ ಭರವಸೆ ಉಳಿದಿಲ್ಲ. ಅವರ ಸಾವಿಗೆ  ನ್ಯಾಯ  ಸಿಗಬೇಕೆಂದು ಹೋರಾಟ ಮಾಡಿದ್ದೇವೆ. ನ್ಯಾಯ ಸಿಗುವ ನಂಬಿಕೆ ಕಳೆದು ಕೊಂಡಿದ್ದೇನೆ. ಇನ್ನು ಎಲ್ಲವನ್ನೂ ದೇವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>