ಕ್ಯಾನ್ಸರ್. ಈ ಮಾರಕ ರೋಗ ಈಗ ಸಾಮಾನ್ಯವಾಗಿಬಿಟ್ಟಿದೆ. ಆಸ್ಪತ್ರೆಗೆ ಹೋದವರು ವಾಪಸ್ ಬರುವಾಗ ಹೇಳುವ ಮಾತು ಕ್ಯಾನ್ಸರ್. ಕೆಮೊಥರಪಿ ಮೂಲಕ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತೆ. ಆದ್ರೆ ಕಿಮೊಥೆರಪಿ ವೇಳೆ ಅನುಭವಿಸುವ ನೋವು ಸಾವಿಗಿಂತ ಘೋರ ಎನ್ನಲಾಗುತ್ತೆ.
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೊಫೆಸರ್ ಡಾ. ಹರ್ಬಿನ್ ಬಿ ಜಾನ್ಸ್ 25 ವರ್ಷಗಳ ಸಂಶೋಧನೆ ನಡೆಸಿದ ನಂತ್ರ ಈ ವಿಷಯವನ್ನು ಹೇಳಿದ್ದಾರೆ. ಕೆಮೊಥೆರಪಿ ಬದಲು ನೈಸರ್ಗಿಕ ಔಷಧಿ ಕ್ಯಾನ್ಸರ್ ರೋಗ ನಿವಾರಣೆಗೆ ಉಪಯುಕ್ತ ಎಂದಿದ್ದಾರೆ. ಇದರಲ್ಲಿ ಅಡ್ಡ ಪರಿಣಾಮಗಳು ಕಡಿಮೆ. ಅಡ್ಡ ಪರಿಣಾಮ ಬೀರದೆ ಬಹುಬೇಗ ಕ್ಯಾನ್ಸರ್ ಗುಣಪಡಿಸುವ ಗುಣವುಳ್ಳ ಹಣ್ಣೊಂದು ನಮ್ಮಲ್ಲಿದೆ. ಅದೇ ದ್ರಾಕ್ಷಿ ಬೀಜ.
ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕ್ಯಾನ್ಸರ್ ಗೆ ದ್ರಾಕ್ಷಿ ಬೀಜ ಒಳ್ಳೆಯದು ಎಂಬ ವಿಷಯ ತಿಳಿದು ಬಂದಿದೆ. ದ್ರಾಕ್ಷಿ ಬೀಜ ರಕ್ತ ಕ್ಯಾನ್ಸರ್ ಹಾಗೂ ಇತರ ಕ್ಯಾನ್ಸರ್ ಹೊಡೆದೋಡಿಸಲು ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆಯಂತೆ. ಸಂಶೋಧನೆ ಪ್ರಕಾರ ದ್ರಾಕ್ಷಿ ಬೀಜ ಕೇವಲ 48 ಗಂಟೆಗಳಲ್ಲಿ ಶೇಕಡಾ 76 ರಷ್ಟು ಕ್ಯಾನ್ಸರ್ ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ.