ನವದೆಹಲಿ: 30 ದಿನಗಳ ಉಪವಾಸ ವ್ರತಾಚರಣೆ ಪೂರ್ಣಗೊಂಡಿದ್ದು, ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ದೇಶಾದ್ಯಂತ ಜುಲೈ 7 ರಂದು ಆಚರಿಸಲಾಗುವುದು. ಕೇರಳದಲ್ಲಿ ಜುಲೈ 6 ರಂದು ರಂಜಾನ್ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಮೊದಲಿಗೆ ಕರಾವಳಿಯಲ್ಲಿ ನಾಳೆ ಆಚರಿಸಲು ತೀರ್ಮಾನಿಸಲಾಗಿತ್ತು.
ಕರ್ನಾಟಕ ಚಂದ್ರ ದರ್ಶನ ಸಮಿತಿ ರಾಜ್ಯದಲ್ಲಿ ಗುರುವಾರ ರಂಜಾನ್ ಹಬ್ಬವನ್ನು ಆಚರಿಸಲಾಗುವುದೆಂದು ತಿಳಿಸಿದೆ. ನವದೆಹಲಿಯ ಜಾಮೀಯಾ ಮಸೀದಿ. ಮುಖ್ಯಸ್ಥ ಶಾಯಿ ಇಮಾಮ್ ಅವರು ಜುಲೈ 7 ರಂದು ರಂಜಾನ್ ಹಬ್ಬ ಆಚರಿಸಲಾಗುವುದೆಂದು ಘೋಷಿಸಿದ್ದಾರೆ. ಅದೇ ರೀತಿ ಲಖ್ನೋದ ಚಾಂದ್ ಸಮಿತಿ ಕೂಡ ಜುಲೈ 7 ರಂದು ರಂಜಾನ್ ಆಚರಿಸಲಾಗುವುದೆಂದು ಸ್ಪಷ್ಟಪಡಿಸಿದೆ. ಜುಲೈ 6 ಬದಲಿಗೆ 7 ರಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ರಜೆ ನೀಡಲಾಗುವುದು.
ನಾಳೆ ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಜುಲೈ 7 ರಂದು ರಂಜಾನ್ ಪ್ರಯುಕ್ತ ರಜೆ ಇರುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ. ಕೇರಳದಲ್ಲಿ ಮಾತ್ರ ಜುಲೈ 6 ರಂದು ರಂಜಾನ್ ಆಚರಿಸಲಿದ್ದು, ದೇಶದ ಉಳಿದ ಭಾಗಗಳಲ್ಲಿ ಜುಲೈ 7 ರ ಗುರುವಾರದಂದು ಹಬ್ಬ ಆಚರಿಸಲಾಗುವುದು ಎಂದು ಹೇಳಲಾಗಿದೆ.
ನಾಳೆ ರಾಜ್ಯದ ಶಾಲೆ= ಕಾಲೇಜುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ಶಾಲಾ, ಕಾಲೇಜು ನಡೆಯಲಿವೆ. ಜುಲೈ 6 ರ ಬದಲಿಗೆ 7 ರಂದು ರಜೆ ಘೋಷಿಸಲಾಗಿದೆ. ಎಲ್ಲಾ ಶಾಲಾ, ಕಾಲೇಜು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಜೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.