Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಹಾವಿಗೆ ಹೆದರಿ ಊರು ತೊರೆದ ಕುಟುಂಬ

$
0
0
ಹಾವಿಗೆ ಹೆದರಿ ಊರು ತೊರೆದ ಕುಟುಂಬ

ಒಂದೇ ಕುಟುಂಬದ ಮೂವರಿಗೆ ಸತತ ಮೂರು ದಿನಗಳ ಕಾಲ ದಿನಕ್ಕೊಬ್ಬರಿಗಂತೆ ಹಾವು ಕಚ್ಚಿದ್ದು, ಇಬ್ಬರು ಸಾವನ್ನಪ್ಪಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ.

ಯಾದಗಿರಿ ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರೆಲ್ಲಾ ಇದರಿಂದ ಆತಂಕಗೊಂಡಿದ್ದಾರೆ. ಯಲ್ಹೇರಿ ಗ್ರಾಮದ ರೆಹಮತ್ ಉಲ್ಲಾರ ಮಗಳು ಸಾನಿಯಾ (11) ಗೆ ಹಾವು ಕಚ್ಚಿ ಮೃತಪಟ್ಟಿದ್ದಾಳೆ. ಮಾರನೆ ದಿನ ಅವರ ತಾಯಿ ಶರೀಫಾ(65) ಹಾವು ಕಡಿತದಿಂದ ಮೃತಪಟ್ಟಿದ್ದರು. ಅವರನ್ನು ನೋಡಲು ಬಂದ ಹೆಂಡತಿ ತಂಗಿ ಶಾಹೀನ್ (25) ಗೂ ಹಾವು ಕಚ್ಚಿದ್ದು, ತೀವ್ರವಾಗಿ ಅಸ್ವಸ್ಥವಾಗಿರುವ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರಿಂದ ಕುಟುಂಬದ ಉಳಿದ ಸದಸ್ಯರು ಮನೆಗೆ ಹೋಗಲು ಭಯಭೀತರಾಗಿದ್ದಾರೆ. ಮನೆಯಲ್ಲಿರುವ ಸಾಮಾನುಗಳನ್ನೆಲ್ಲಾ ಬಿಟ್ಟು ಬೇರೆ ಗ್ರಾಮಕ್ಕೆ ತೆರಳಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರೆಲ್ಲಾ ಬೆಚ್ಚಿ ಬಿದ್ದಿದ್ದು, ಹಾವು ಹಿಡಿಯುವ 6 ಜನರ ತಂಡ ಗ್ರಾಮಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>